Friday, November 9, 2012

ಡ್ರೈವರನನ್ನು ಮೆಚ್ಚಲೆ ಬೇಕು...

ಹಾಗೆ ಪಿಯುಸಿ ಮುಗಿಸಿ ಒಳ್ಳೆ ರ್ಯಾಂಕು ಬಂತು ದೇವರ ದಯೆ ಯಿಂದಾ ಅಂತಾ ಯೊಚನೆ ಮಾಡೊದ್ರಾ ಒಳಗೆ. ಸಿ.ಈ.ಟಿ. ಕೌನ್ಸಿಲಿಂಗು ಅಂದರು. ನನಗು ಮನಸಲ್ಲಿ ಸ್ವಲ್ಪಾ ಹೆದರಿಕೆ ಯಾವ್ ಕಾಲೇಜ್ ಸಿಗತ್ತೊ  ಯೇನ್ ಮಾಡೊದೊ ಯೇವ್ ಊರಿಗೆ ಹೊಗಬೇಕೊ ಅಂತಾ ಹೆದರಿಕೆ ಯಿಂದಾನೆ ಬಂದೆ ಬೆಂಗಳುರಿಗೆ. ಇಲ್ಲಿನೆ ಬಹುಮಹಡಿ ಕಟ್ಟಡ ಜನಸಂಕ್ಯೆ ಯೆಲ್ಲಾ ನನಗೆ ಹಳೆಯದೆನಲ್ಲಾ ನಾನು ದೊಡ್ಡ ಊರಿನಲ್ಲಿ ಸ್ವಲ್ಪ ದಿನ ಕಳೆದು ಅಭ್ಯಾಸ ಇತ್ತು. ಅಂತು ಕಶ್ಟಾ ಪಟ್ಟು ಸೀ.ಇ.ಟಿ. ಸೆಲ್ ಹುಡಕಿ ರಾಮಯ್ಯ ಕಾಲೇಜಿನಲ್ಲಿ ಸೀಟು, ಅಂತಾ ಆಯತು.

ಖುಷಿ ಅಂತು ಆಯಿತು ಆಗದೆ ಇರತ್ತ ನನ್ನ ಇನ್ನು ೨ ಜನ ಪಿಯುಸಿ ದೊಸ್ತರು ಅಲ್ಲೆ ಸೀಟ್ ಸಿಕ್ಕಿದೆ ಅಂತಾ ಹೇಳಿದ್ದರು. ಅಂತಾ ಹೆದರಿಕೆ ಯೇನು ಆಗಲಿಲ್ಲ. ಆದರೆ ಅಪ್ಪನಿಗೆ ಮಾತ್ರಾ ಯೆಲ್ಲದರಲ್ಲು ಅವಸರ.  ಸೀಟೆನೊ ತಗೊಂಡಾಯಿತು ೨ ದಿನಾ ಬೆಂಗಳುರು, ಹಾಸ್ಟೆಲು, ಕಾಲೆಜು, ಯೆಲ್ಲಾ ಸುತ್ತಿ ನೋಡಣಾ ಅಂತಾ ಇದ್ದೆ. ಅಹಾ ಅಪ್ಪ ಮಾತ್ರಾ ಒಪ್ಪಲೆ ಇಲ್ಲ ಬೆಳೆಗ್ಗೆ ೪ ಗಂಟೆಗೆ ಯೇಳಿಸಿ ಸ್ನಾನಾ ಮಾಡಿಸಿ ಕಾಲೇಜ್ ನಲ್ಲಿ ಅಡ್ಮಿಶನ್ ಮಾಡಿಸಿ. ೧೦ ಗಂಟೆ ಬೆಳಗಿನ ಜಾವದ ಬಸ್ಸಿಗೆ ಹತ್ತಿಸಿ ಕಳುಹಿಸಿಯೆ ಬಿಟ್ತರು ಮನೆಗೆ. 

ತುಮಕುರು ಮುಟ್ಟುವ ಹೊತ್ತಿಗೆ ಬಸ್ಸು ತನ್ನ ನಿಜವಾದ ಸ್ತಿತಿ ತೊರಸಿತ್ತು. ಮುಂದಿನ ಯೆರಡು ಗಾಜು ಕಳಚಿ ಬಿದ್ದಿತು. ಡೀಪೊಗೆ ಹೋಗಿ ಸರಿ ಮಾಡಿಸಿ ಕೋಂಡು ಹೋಗೊಂಣಾ ಅಂತಾ ಡ್ರೈವರ್ರು ತಿರುಗಿಸಿದಾ ಡೀಪೊ ಕಡೆ ಅಂತು ೧ ಘಂಟೆ ನಂತರ ಪಿಕ್ಸ್ ಆಗಿದೆ ಅಂತಾ ಮತ್ತೆ ಹೊರಟಿ ನಿಂತಿತು ಬಸ್ಸು. ಹೊರಟು ೧೫ ನಿಮಿಶಾನು ಆಗಿರಲಿಲ್ಲಾ ಮತ್ತೆ ಬಿದ್ದವು ೨ ಗ್ಲಾಸ್. ಡ್ರೈವರ್ ಆದರು ಬಿಡಲಿಲ್ಲ ಗಾಳಿ ಯೆಶ್ಟಾದರು ಬರಲಿ ಹೋಗೆ ಬಿಡೊಣಾ ಅಂತಾ ಗಾಡಿ ಪುಲ್ ಸ್ಪೀಡಿನಲ್ಲಿ ಹೊಗ್ತಾನೆ ಉಳದ ಬಸ್ಸಿ ನಲ್ಲಿ ಒಳ್ಳೆ ಚಂಡಮಾರುತಾ ಬೀಸಿದ ಹಾಗೆ ಗಾಳಿ ಹೊಡೆತಾ. 

ಹಾಗೆ ೪ ಗಂಟೆ ಗ್ಲಾಸ್ ಇಲ್ಲದೆ ಪ್ರಯಾಣಾ ಮಾಡಿದ ನಂತ್ರರ ಮಳೆ ಶುರುವಾಯಿತು. ಈಗಾ ಯೇನು ಮಾಡೊದು ಒಂದು ರಗ್ಗನ್ನು ತಂದು ಡ್ರೈವರನ ಹಿಂದೆ ಕಟ್ಟಿದರು ಮಳೆ ನೀರು ಬಸ್ಸಿನ ಒಳಗೆ ಬರದಂತೆ ಅದು ಯೆಲ್ಲಿ ತಡಿಯತ್ತೆ. ಸಾಕಾಗಲಿಲ್ಲಾ ಒಂದು ಗೋಣಿ ಚೀಲಾ ಯೆಲ್ಲಾ ಕಟ್ಟಿ ಆದಮೇಳೆ ಹೇಗೊ ಸ್ವಲ್ಪಾ ಮುಂದಿನ ೫ ಸೀಟ್ ಬಿಟ್ಟು ಒದ್ದೆ ಆಗದಂತೆ ಕೂತೆವು. ಪಾಪಾ ನಾವೆನೊ ಮಾಡಬಹುದು ಡ್ರೈವರ್ ಯೇನು ಮಾಡಿಯಾನು. ಅವನು ದೈರ್ಯಾ ಮಾಡಿ ನಾನು ಗಾಡಿ ಓಡಿಸುತ್ತೆನೆ ನೀವು ಒಂದು ರೈನ್ ಕೋಟ್ ಕೊಡಿ ಅಂದ ಬಸ್ಸು ಯಾರೊ ಒಂದು ರೈನ್ ಕೋಟ್ ಕೊಟ್ತರು. ಅದರೆ ಸಾಗರ ದಟುವ ಹೊತ್ತಿಗೆ ಮಳೆ ತುಂಬಾ ಹೆಚ್ಚಯಿತು. ಗಾಳಿನು ಜಾಸ್ತಿ ಆಯಿತು ಚಳಿ ಬೇರೆ. ಅದಕ್ಕೆ ಮತ್ತೊದು ಸ್ವೆಟ್ಟರ್ ಹಾಕಿ ಅದರ ಮೇಲೆ ರೈನ್ ಕೋಟ ಹಾಕಿ ಡ್ರೈವರ್ ರೇಡಿ ಮಾಡಿ ಬಸ್ಸು ಹೊರಟಿತು.

ಅಂತು ಸಿದ್ದಪುರಾ ದಾಟಿದಮೇಳೆ ಮಳೆ ತಾಳಲಾಗದೆ ಒಂದು ಕನ್ನಡಕ. ಒಂದು ಟೊಪ್ಪಿ ಹಾಕಿ ಮತ್ತೆ ಬಸ್ಸು ಚಾಲನೆ ಶುರು. 
೫ ಗಂಟೆ ಮಳೆಯಲ್ಲಿ ನೆನೆದು ಸಿರ್ಸಿ ತಂದು ೧೦ ಗಂಟೆಗೆ ಸರಿಯಾಗಿ ಮುಟ್ಟಿಸಿದ ಕೆ.ಎಸ್.ಅರ್.ಟಿ.ಸಿ. ಡ್ರೈವ ಮತ್ತು ಕಂಡಾಕ್ಟರ್ ಗಳಿಗೆ ಧನ್ಯವಾದ.

--- ಸುಮಂತ

Thursday, October 18, 2012

ಬೆಂಗಳುರು -- ಸಿರ್ಸಿ


ತಗಳಪ ಇವತ ಸಂಜೆ ಮನೆಗೆ ಹೋಪದು. ಸುಮಾರ ೧೦ ತಿಂಗಳಿಂದಾ ಕೆಲ್ಸಾ ಅದು ಇದು ಹೇಳಿ ಮನೆಗೆ ಹೊಗದ್ದೆ ಕೂತಾತು. ಆದ್ರೆ ಅಂತು ನವರಾತ್ರಿಗೆ ಕಾಡಿ ಬೇಡಿ ೨ ದಿನಾ ರಜೆ ಗಿಟ್ಟಸ್ಕಂಡೆ ಬಿಟ್ಟಿ ಬಿಲ್ಯಾ. ಹೋಪ ಉತ್ಸಾಹಕ್ಕೆ ಬೇಳಗಿಂದಾ ಯೆಂತದು ಮಾಡಿದ್ನಿಲ್ಲೆ. ಹೊರಡ ಟೈಮಗೆ ಕಾಯತಾ ಇದ್ದಿದ್ದು ಅಶ್ಟೆ. ಮನೆಲಂತು ಮಗಾ ಬತ್ತಾ ಇದ್ದಾ ಹೇಳಿ ಅಮ್ಮಂತು ಅದ್ರ ತಗಾ ಬಾ ಇದ್ರ ತಗಾ ಬಾ. ದೊಡ ಬ್ಯಾಗ್ ತಗಬಾ ಅದ್ರಾ ತುಂಬಕಂಜ್ಯ ಇದು ಯೆಲ್ಲಿಟ್ಟಿದೆ ೫ ನಿಮಶಕ್ಕೆ ಒಂದೊಂದು ಫೊನು. ಅಂತು ಯೆಲ್ಲಾ ಸುದಾರಸಿ ೪ ಬಟ್ಟೆ ಹಾಕಂಡು ಹೊರಟ್ಯ. ಅದೇ ಟೈಮಿಗೆ ಒಬ್ಬಂಗೆ ಭಾರಿ ಯೊಚನೆ ಬಂತು ಟ್ರೈನ್ ಗೆ ಹೊಗ್ಬಿಡನ ಹೇಳಿ ನನಗು ಇನ್ನು ಟ್ರೈನ್ ಹತದವಲ್ಲಾ ಸಕತ್ ಉಮೇದಿ ಬಂತು ಯೆಲ್ಲಾ ಸೇರಿ ಜೈ ಹೋಗೆಬಿಡನ ಹೇಳಿ ಹೊರಟ್ಯ.
ಗಾಡಿ ಯೇನೊ ಸುಪರ್ರು ಜನರಲ್ ಟ್ರೈನು. ನಾವು ಯೆಲ್ಲಾ ಒಂದೆ ವಾರಗೆ ಯವ್ವೆ ೫ ಜನಾ ಹತ್ತದ್ಯಾ ಹೇಳಾತು ಕಷ್ಟಾ ಪಟು ಮೆಜೆಸ್ಟಿಕ್ ರೈಲ್ವೆಯ ಸ್ಟೆಶನ್ನಿಂದಾವಾ ಹಾವೇರಿ ಗೆ ಹೊಪಲೆ. ಸ್ವಲ್ಪಾ ಹೊತ್ತಲ್ಲೆ ಗೊತ್ತಾತು ಇದಕ್ಕೆ ಜನರಲ ಯೆಂತಕ್ಕೆ ಹೇಳತಾ ಹೇಳಿ ಯೆಲ್ಲಿ ನೋಡದ್ರು ಜನಾನೇಯಾ. ಸೀಟು ಸಿಕ್ಕತಲ್ಲಾ ಅಂತಾ ಅರಾಮ ಹೇಳಿ ಇದ್ದಿದ್ದೆ ಅಶ್ಟೆ ಹೊತ್ತಿಗೆ ಒಂದ ಜೋಡಿ ಬಂದ ೩-೪ ವರ್ಷದ ಮಗು ಕರಕಂಡು ಸ್ವಲ್ಪಾ ಜಾರ್ಕೊಳಿ ಸಾರ್ ಅವರಾ ಆ ಹೊಣ್ ಬಾರದ್ದು ಬ್ಯಾಗು ಆ ಪಾಪು ನಾ ನೋಡಿ ಕುತಗಳಿ ಅಂತಾ ಸ್ವಲ್ಪಾ ಸರಾದಾತು. ಅಂತು ೪ ಜನರ ಸೀಟಲ್ಲಿ ೭ ಜನಾ ಆತು.
ಇನ್ನೆನೆ ಟ್ರೈನ್ ಹೊರಡವು ೨೦ ಜನ ಬಂದ ಒಬ್ಬವಾ ಉದ್ದಾ ಸೀಟೆ ಕೆಳಗೆ ಟುವಾಲ ಹಾಕಂಡು ಮಲಕಂಡ ಹೋಗಲಿ ಬಿಡೀ ಅವನಿಗು ಜಗಾ ಬೇಕಲ್ಲಾ ಅಂತಾ ಮಜಾ ಇದೆ ಅನಸ್ತು. ೭-೮ ಜನಾ ಮೇಲಿನಾ ಸೀಟ ಹತ್ತಿದರು ಕಾಲನ್ನಾ ಬಟ್ಟೆ ಒಣಗಿಸಿದಾ ಹಾಗೆ ಕೆಳಗೆ ಇಳಿ ಬೀಟ್ವಪಾ. ಈಗಾ ಒಟ್ಟು ಒಂದ ಸೀಟಲ್ಲಿ ೭ ಜನಾ ಕೆಳಗೆ ಮಲಗಿದವ್ನು. ಮೇಲಿನಾ ಸೀಟಲ್ಲಿ ೭-೮ ಜನಾ ಒಟ್ಟು ೮ ಜನಾ ಹೋಗೊ ಸೀಟಲ್ಲಿ ೨೦ ಜನಾ ಆದ್ರು. ಇರ್ಲಿ ಕಾಲು ಅಲುಗಾಡಿಸುವ ಹಾಗಿಲ್ಲಾ ಕೈ ಜೊರಾಗಿ ಯೆತ್ತೊ ಹಾಗಿಲ್ಲ
ಬೇರೆಯವರ ಮುಖಕ್ಕೆ ಬಡಿಯತ್ತೆ. ಹೆಂಗೊ ಬಂದಿದ್ದು ಬಂದಾಜು ಒಟ್ಟು ಹೋರಟ್ರೆ ಸಾಕು ಹೇಳಿ ಕಾಯತಾ ಇದ್ದಿದ್ದಿ. ಅಂತು ಕುಉಉಉ ಹೇಳಿ ಶಭ್ದಾ ಮಾಡಕತ್ತಾ ಹೊರಟಾ ಹೇಳತು ಹೊರಟು ೨ ನಿಮಶಾ ಆಜಿಲ್ಲೆ ಸ್ಟೊಪ್ ಬಂದೊತು. ೧೫ ನಿಮಶಾ ನಿಲಸ್ದಾ ಆತು ಮತ್ತೆ ಹೊರಟಾ ೨ ನಿಮಶಾ ಹೋದಾ ೧೫ ನಿಮಶಾ ನಿಲಸ್ದ. ಇದು ಅಪ್ಪದಲ ವರಗಿ ಬಿಡನ ಹೇಳಿ ಮಲಗ್ದೆ ಹೇಳಾತು ಆ ಗಲಾಟೆ ಗೌಜಿ ಗೆ ೫-೧೦ ನಿಮಶಕ್ಕೆ ಯೆಚರಪ್ಪದು. ಯೆದ್ದು ನೋಡತು ಯಾವಾಗ ನೋಡ್ರು ಟ್ರೈನ್ ನಿತಗಂಡೆ ಇರತು. ಬೆಳಗಾತು ಇನ್ನು  ಹೊಗ್ತಾ ಇದ್ದಾ ಹೊಗ್ತಾ ಇದ್ದ ಹಾವೆರಿ ನೆ ಬತ್ತಿಲ್ಲೆ. ಅಂತು ೧೧ ಗಂಟೆಗೆ ತಂದು ಹಾವೇರಿ ಮುಟ್ಟಸ್ದಾ. ಅಲ್ಲಿಂದಾ ಬಸ್ ಸ್ಟಾಂಡ್ ಗೆ ಒಳ್ಳೆ ಆಟೊ ವ್ಯವಸ್ತೆ ಇತ್ತು ಬಂದಾತು. “ಸಿರ್ಸಿ ಗೆ ಬಸ್ಸು ಯೆಷ್ಟ್ ಗಂಟೆಗೆ ಬರತ್ತಪ್ಪಾ?” ಅಂತಾ ಕೇಳದೆ “೨ ತಾಸ್ ಆಗತ್ತೆ ಸರ್” ಅಂದ್ ಬಿಡಬೇಕೆ ಆಯ್ತು ಅಂತಾ ಕಶ್ಟಾ ಪಟ್ಟು ಯೆಲ್ಲೊ ಒಂದು ತಿಂದುದು ೨ ತಾಸ್ ಕಾದು ಹತ್ತಿದೆ ಬಸ್ಸು ಸಿರ್ಸಿಗೆ ಅದು ಆಕಡೆ ಈ ಕಡೆ ವಾಲತಾ ಹೊರಡತು. ಅರ್ದಾ  ದಾರಿಗೆ ಟೈರ್ ಪಂಚರ ಆಗಿದೆ ಅಂತಾ ನಿಲ್ಲಸಿ ಬಿಡಬೇಕಾ. ನನ್ನ ಹೊಟ್ಟೆ ಬೇರೆ ತಾಳಾ ಹಾಕತಾ ಇದೆ ಇರೊ ರಜೆ ನೆ ೨ ದಿನಾ ಹೋಗೊಕೆ ೨ ದಿನಾ ಆಯತಲ್ಲಪಾ ಅಂತಾ ಬೈತಾ ಸ್ವಲ್ಪಾ ಹೊತ್ತನಲ್ಲೆ ಡ್ರೈವರ್ರು ಕಂಡಕ್ಟರ್ರು ಸೇರಿ ಹತ್ತಿ ಹತ್ತಿ ಸರಿ ಆಯತು ಗಾಡಿ ಅಂದಿದ್ದೆ ತಡಾ ಓಡಿ ಬಂದು ಹತಕೊಂಡೆ ಗಾಡಿನಾ.
ಆಂತು ೪ ಗಂಟೆಗೆ ಸಿರ್ಸಿ ಬಸ್ ನಿಲ್ದಾಣಾ ಕಂಡ ಕುಡಲೆ ಗಟ್ಟಿ ಉಸರ್ಬಿಟ್ಟೆ. ಸಂತಿಗೆ ಬಂದವ್ಕೆಲ್ಲಾ ಸಿಗನ ಹೇಳಿ ಮನೆಗೆ ದಾರಿ ಹಿಡದಿ. ಇದು ಒಂತರ ಮರಯಲೆ ಆಗದೊ ಹೋದಂತ ಪ್ರಯಾಣಾ ಆಗೊತು. ಇದರ ಮಜಾ ಇನ್ನು ಅರಾಮ್ ಆಗಿ ಮನೆಗೆ ಹೋಗಿ ಮುಟ್ಟಿದ್ರಲ್ಲಿ ಒಮ್ಮೆನು ಬಂಜಿಲ್ಲೆ.